Directed by
|
|
Produced by
|
S.
Prasanna
S.
Shashikala Balaji
|
Screenplay by
|
Vijaya
Prasad
|
Story by
|
Vijaya
Prasad
|
Starring
|
|
Music by
|
|
Cinematography
|
Sugnan
|
Edited by
|
|
Production
company
|
Skkandda
Entertainment
|
Distributed by
|
C K
Cine Creations
|
Release dates
|
|
Running time
|
135
minutes
|
Country
|
India
|
Language
|
Kannada
|
ಬಣ್ಣ ಬಣ್ಣದ
ಚಿತ್ತಾರ ಬಿಡಿಸುವಷ್ಟೇ ಸೊಗಸಾಗಿ ವಿಜಯ ಪ್ರಸಾದ್ ಅವರು ಪಾತ್ರಗಳನ್ನ ತೆರೆ ಮೇಲೆ ತೆರೆದಿಡ್ತಾರೆ
. ಅವರ ಈ ಕಲಾ ನೈಪುಣ್ಯತೆ ನೀರ್ ದೋಸೆಗೆ ಕೂಡ ಜೀವ ತುಂಬ ಬಲ್ಲದ್ದು . ಬಹಳ ಬೋಲ್ಡ್ ವಿಷಯವನ್ನು
ಆಯ್ಕೆ ಮಾಡಿದ್ದು , ನಿಸ್ಸಂಕೋಚವಾಗಿ ಕಥೆಗೆ ವಿಷಯ ತುಂಬಿದ್ದಾರೆ.
ಸಂಭಾಷಣಾ ಶೈಲಿ ,
ಹಾಡುಗಳು ,ಪ್ರಮುಖ ಪಾತ್ರಗಳ ಬಾಲ್ಯಕ್ಕೆ ಕೊಡುವ ಒತ್ತು, ಬಣ್ಣರಹಿತ ದೃಶ್ಯಗಳ ಪ್ರಯೋಗ ,
ಸಾವನ್ನು ಸಂಬೋಧಿಸುವ ರೀತಿ - ಇವೆಲ್ಲವನ್ನೂ ಗಮನಿಸಿದರೆ ವಿಜಯ ಅವರು ತಮ್ಮ ಛಾಪು ಬಿಡದೆ
ವೈವಿಧ್ಯ ಸಿನೆಮಾಗಳನ್ನು ಮಾಡಲು ಸಮರ್ಥರು ಎಂದು ಖಾತ್ರಿಗೊಳಿಸುತ್ತದೆ .
ಡಬ್ಬಲ್
ಮೀನಿಂಗ್ ಸಂಭಾಷಣೆಯನ್ನೇ ಬಂಡವಾಳವಾಗಿಸಿಕೊಂಡು ಸಿನೆಮಾ ಗೆಲ್ಲಿಸುವ ಪ್ರಯತ್ನ ಇದು ಖಂಡಿತಾ ಅಲ್ಲ
! ಸಿನೆಮಾ ಹೇಳುವ ವಿಚಾರ ತೀರಾ ಅಶ್ಲೀಲ ಅನ್ನಿಸಬಾರದು ಎಂಬ ಕಾರಣಕ್ಕೆ ಮಾತ್ರ ಬಳಸಿಕೊಳ್ಳಲಾಗಿದೆ
.ಒಂದು A certificate ಸಿನೆಮಾ ನ ಇಷ್ಟು ಮಾನವಂತವಾಗಿ ಪ್ರಸ್ತುತ
ಪಡಿಸಿರುವುದಕ್ಕೆ ನೀರ್ ದೋಸೆ ಚಿತ್ರ ತಂಡಕ್ಕೆ ಪೂರ್ಣ ಅಂಕಗಳನ್ನ ಕೊಡಲೇ ಬೇಕು .
ಈ ವರೆಗೆ
ನಾವ್ಯಾರೂ ನೋಡದಂತಹ ದತ್ತಣ್ಣನ್ನ ಅವರ ನೂರನೇ ಚಿತ್ರದಲ್ಲಿ ನಾವೆಲ್ಲಾ ನೋಡಬಹುದಾಗಿದೆ . ನಗು, ಅಳು ಎಲ್ಲವೂ ವಿಭಿನ್ನವಾಗಿ ನೀಡಿ ಕಡೆಗೆ ಛಳಿ ಬಿಟ್ಟು ಡಾನ್ಸ್ ಕೂಡ ಮಾಡಿ ತಮ್ಮ ಪಾತ್ರಕ್ಕೆ
ಸಂಪೂರ್ಣ ನ್ಯಾಯ ಒದಗಿಸಿದ್ದಾರೆ .
ದತ್ತಣ್ಣ ಅವರ
ಪಾತ್ರದ ಸಮಕ್ಕೆ ನಿಲ್ಲುವ ಜಗ್ಗೇಶ್ ಅವರ ಪಾತ್ರ ಪ್ರೇಕ್ಷಕರಿಗೆ ಎಲ್ಲಿಯೂ ವಯ್ಯಕ್ತಿಕ ತಿಕ್ಕಾಟ
ಅಥವಾ ಪೈಪೋಟಿಗೆ ನಿಂತಂತೆ ಕಾಣುವುದಿಲ್ಲ . ಜಗ್ಗೇಶ್ ಅಂತಹಾ ಮಾಸ್ ಹೀರೊ ಇಷ್ಟು ಅದ್ಭುತವಾಗಿ
ಇಂತಹಾ ಪಾತ್ರಕ್ಕೆ ಒಗ್ಗಿರುವುದು ನೋಡಿದರೆ ಅವರಿಗೆ ತಮ್ಮ ಪಾತ್ರದ ಬಗ್ಗೆ , ಅಭಿನಯದ ಬಗ್ಗೆ
ಇರುವ ಅರಿವು ಮತ್ತು ಗೌರವವನ್ನು
ನಿರೂಪಿಸುತ್ತದೆ.
ಒಬ್ಬ ಉತ್ತಮ
ಕಲಾವಿದ ತನ್ನ ಪ್ರೇಕ್ಷಕರ ಮನಸ್ಸು ಗೆಲ್ಲೋದಕ್ಕೆ, ತಾನು ಎಷ್ಟು ಸಮಯ ತೆರೆಯ ಮೇಲೆ ಕಾಣ್ತೀನಿ
ಅಥವಾ ತನ್ನ ಪಾತ್ರಕ್ಕೆ ಎಷ್ಟು ಡಯಲಾಗ್ ಗಳು ಇವೆ ಅನ್ನುವುದರ ಬಗ್ಗೆ ಯೋಚಿಸುವುದಿಲ್ಲ . ಸುಮನ್
ರಂಗನಾಥ್ ಅವರು ಅಲ್ಲಲ್ಲಿ ಇಣುಕುವ ಪಾತ್ರದಲ್ಲಿದ್ದರೂ , ಮೊದಲ ಬಾರಿ ಅವರನ್ನು ಕಾಣುವವರ
ಮನಸ್ಸನ್ನೂ ಗೆದ್ದುಬಿಡುವಂತೆ ಅಭಿನಯಿಸಿದ್ದಾರೆ .
ಹರಿಪ್ರಿಯಾ
ಚಿತ್ರದ ಜೀವಾಳ . ಸುಮನ್ ಅವರ ಪಾತ್ರದ ಆಳ ಪ್ರೇಕ್ಷಕನ ಯೋಚನೆಗೆ ತಕ್ಕಂತೆ ಎನ್ನುವುದಾದರೆ ,
ಹರಿಪ್ರಿಯಾ ಅವರ ಪಾತ್ರದ ಆಳ ವಿಜಯ ಅವರು ಬಿಡಿಸಿ ಇಟ್ಟಷ್ಟೇ. ಒಂದೇ ಮಾತಲ್ಲಿ ಹೇಳುವುದಾದರೆ
ಹರಿಪ್ರಿಯಾ ಅವರು ಸಂಪೂರ್ಣ ನಿರ್ದೇಶಕನ ಕೈಗೊಂಬೆಯಾಗಿ ನಟಿಸಿ ಈ ಪಾತ್ರದ ಗೆಲುವಿಗೆ ಕಾರಣರಾಗಿದ್ದಾರೆ. ಚಿತ್ರರಂಗದಲ್ಲಿ ತಮ್ಮ ಸ್ಥಾನ
ಹೆಚ್ಚಿಸಿಕೊಂಡಿದ್ದಾರೆ
ಬಾಲ್ಯದ
ಕಥೆಯಲ್ಲಿ ಅಭಿನಯಿಸಿರುವ ನಟ ನಟಿಯಿಂದಾ ಹಿಡಿದು ದತ್ತಣ್ಣ ಪಾತ್ರದ ಅಕ್ಕನ ಪಾತ್ರ ವಹಿಸಿರುವ ನಟರ ವರೆಗೂ ಎಲ್ಲಾ ಸಣ್ಣ ಪುಟ್ಟ ಪಾತ್ರಗಳ ನುರಿತ ಅಭಿನಯ ಈ ಚಿತ್ರವನ್ನು ಹುರುಪು ಗೊಳಿಸಿದೆ.
ಅರಸು
ಅಂತಾರೆ ಮತ್ತು ಅನೂಪ್ ಸೀಳಿನ್ ಅವರ "ಸಪುರ ಕಟಿ" ಪ್ರಯೋಗ ಕೇಳುಗರನ್ನು ಬಹಳವಾಗಿ ಆಕರ್ಷಿಸುತ್ತದೆ
.ಸುಗನ್ ಅವರ ಛಾಯಾಗ್ರಹಣೆ ಮತ್ತೆ ಮತ್ತ ಸಿನಿಮಾ ನೋಡುವಂತೆ ಮಾಡುತ್ತದೆ .